ಯಾಕೋ ಬರಲಿಲ್ಲ
ಮಳೆರಾಯ ನಮ್ಮೂರಿಗೆ
ನಿನ್ನ ಮಕ್ಕಳಾಗಿರುವ
ನಮ್ಮ ರೈತರ ನಾಡಿಗೆ
ಮೊದಲ ಮಳೆಯ ಮಣ್ಣಿನ
ಸವಿಗೆಂಪು ಬಲುಚೆಂದ
ಗುಡುಗು ಮಿಂಚುಗಲೊಡನೆ
ಬರುವ ರಭಸವೇ ಅಂದ
ನೀ ಬರದೆ ಬೆಳೆಯಿಲ್ಲ
ನಿನ್ನಿಂದ ನಮಗೆಲ್ಲ
ನೀನಿರದೆ ಕಾಡಿಲ್ಲ
ಕಾಡಿಲ್ಲದೆ ನೀನಿಲ್ಲ
'ಆದರೂ'
ನಿನ್ನ ಮಕ್ಕಳ ಎಲ್ಲ ತಪ್ಪನು ಕ್ಷಮಿಸಿ
ಬೇಗನೆ ಬಾರೋ ಮಳೆರಾಯ
ಕುಡಿಯಲು ನೀರಿಲ್ಲ ಬಾಯಾರಿದೆ
ಜಗವೆಲ್ಲ ನೀ ಬಾರದೆ
ನಾವೆಲ್ಲ ಇರುವುದು ನಿಜವಲ್ಲ
ಯಾವಾಗಲೂ ಬರೋ ಮಳೆರಾಯ
ಇನ್ನು ಯಾಕೆ ಬರಲಿಲ್ಲ
ಬೇಡುತಿರುವುದು ಜಗವೆಲ್ಲ
ವರುಣದೇವನೇ ನಿನ್ನ
ಒಮ್ಮೆ ಬಂದು ಬಿಡು ಈ ಧರೆಗೆ
No comments:
Post a Comment